ಬೆಳ್ಳಂಬೆಳಗ್ಗೆ ಬಾವಿ ತಡೆಗೋಡೆಗೆ ಲಾರಿ ಡಿಕ್ಕಿ ➤ ಪ್ರಾಣಾಪಾಯದಿಂದ ಪಾರಾದ ಚಾಲಕ ಮತ್ತು ನಿರ್ವಾಹಕ

(ನ್ಯೂಸ್‌ಕಡಬ) newskadaba.com ಪುತ್ತೂರು , ಆ 18: ಮಾಣಿ-ಮೈಸೂರು ರಾಷ್ರೀಯ ಹೆದ್ದಾರಿಯ ಶೇಕಮಲೆ ಅಟಲ್ ನಗರ ಎಂಬ ಸೇತುವೆ ಬಳಿ  ಲಾರಿಯೊಂದು  ಡಿಕ್ಕಿ ಹೊಡೆದಿದ್ದು ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ನಡೆದಿದೆ.

 

ಬೆಂಗಳೂರಿನಿಂದ ಮಂಗಳೂರು ಕಡೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಇರುವ ಬಾವಿ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಬಾವಿ ಕಟ್ಟೆ ಸಂಪೂರ್ಣವಾಗಿ ಒಡೆದು ಹೋಗಿದೆ. ಹಾಗೆಯೇ ಕಾಂಕ್ರೀಟ್ ಸ್ಲಾಬ್ ಗಳು ಚೂರಾಗಿದೆ. ಬಾವಿ ಕಟ್ಟೆ ಪೂರ್ತಿ ಒಡೆದು ಇನ್ನೇನು ಲಾರಿ ಬಾವಿಯೊಳಗೆ ಬೀಳುವ ಕ್ಷಣಾರ್ಧದಲ್ಲಿತ್ತು. ಆ ವೇಳೆ ಪವಾಡ ಎಂಬಂತೆ ಲಾರಿಯ ಪ್ಲೇಟ್ ತುಂಡಾಗಿ ಬಾವಿ ಕಟ್ಟೆಯ ಕಲ್ಲೊಂದರಲ್ಲಿ ಜಾಮ್ ಆಗಿದೆ. ಬಳಿಕ ಚಾಲಕ ಹಾಗೂ ನಿರ್ವಾಹಕ ಲಾರಿಯಿಂದ ಕೆಳಗಿಳಿದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Also Read  ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಸೂಸೈಡ್

error: Content is protected !!
Scroll to Top