ಎಸ್.ಡಿ.ಪಿ.ಐ ಪಕ್ಷದ ಕುರಿತು ಸುಳ್ಳಾರೋಪ | ಪ್ರತಿಭಟನಾಕಾರರ ವಿರುದ್ದ ಠಾಣೆಗೆ ದೂರು

(ನ್ಯೂಸ್‌ ಕಡಬ) ಕಡಬ, ಆ. 15, ಡಿಜೆ ಹಳ್ಳಿಗೆ ಸಂಬಂಧಿಸಿದಂತೆ ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಕೋಮು ವಿಷಬೀಜ ಬಿತ್ತಿ ಗಲಭೆಗೆ ಪ್ರಚೋದನೆ ಮತ್ತು ಸುಳ್ಳು ಸುದ್ದಿ ಆರೋಪ ಮಾಡಿದ್ದಾರೆಂದು ಕಡಬ‌ ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನಾಕಾರರ ವಿರುದ್ದ ಠಾಣೆಗೆ ದೂರು ನೀಡಿದ್ದಾರೆ.

ಶಾಂತಿಪ್ರಿಯವಾದ ಕಡಬದಲ್ಲಿ ಕೋಮು ಪ್ರಚೋದನೆ ಮಾಡುವ ಮೂಲಕ ನಾಗರಿಕರಲ್ಲಿ ಭಯ, ಆತಂಕ ಮೂಡಿರುವುದಲ್ಲದೇ ಪಕ್ಷದ ವಿರುದ್ದ ಸುಳ್ಳು ಆರೋಪವನ್ನು ಎತ್ತಿಕಟ್ಟಿ, ಪ್ರತಿಭಟನೆಯ ಮೂಲಕ ವಿದ್ವಂಸಕ ಕೃತ್ಯ ನಡೆಸುವುದಾಗಿ ಬಹಿರಂಗ ಸವಾಲೆಸೆದಿರುವುದು ಕಡಬದ ಸ್ವಾಸ್ಥ್ಯವನ್ನು ಕೆಡಿಸುವ ಹುನ್ನರವಾಗಿದೆ, ಅಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದ ಪ್ರಮುಖರನ್ನು ವಿಚಾರಿಸಿ ಇನ್ನುಮುಂದೆ ಸುಳ್ಳಾರೋಪಗಳನ್ನು ಮಾಡದಂತೆ ಎಚ್ಚರಿಕೆಯನ್ನೂ ನೀಡಬೇಕೆಂದು, ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸುವಂತೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!

Join the Group

Join WhatsApp Group