ನಾಗರ ಪಂಚಮಿಯ ದಿನ ಕುಕ್ಕೇ ಸುಬ್ರಹ್ಮಣ್ಯದಲ್ಲಿ ನಡೆಯಿತು ಅಚ್ಚರಿ..⁉️ ➤ ಪೂಜೆಗೂ ಮೊದಲು ಪ್ರತ್ಯಕ್ಷನಾದ “ನಾಗರಾಜ”…‼️

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ: ಜು.25, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ಸರಳವಾಗಿ ನಡೆದ ನಾಗರ ಪಂಚಮಿಯ ದಿನದಲ್ಲಿ ಇಂದು ಅಚ್ಚರಿಯ ದಿನ.

ಪ್ರಸಿದ್ಧ ಕುಕ್ಕೇ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿಯ ದಿನವಾದ ಇಂದು ಪೂಜೆಯ ಮೊದಲು ಪ್ರತ್ಯಕ್ಷನಾಗಿಯೇ ಬಿಟ್ಟ ಜೀವಂತ ನಾಗರಾಜ..! ಕ್ಷೇತ್ರದ ಹೊರಾಂಗಣ, ಒಳಾಂಗಣ ಸುತ್ತಾಡಿದ ಈ ನಾಗರಹಾವು ನಂತರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದೆ.

ನಾಗರಪಂಚಮಿಯ ಪುಣ್ಯ ದಿನವಾದ ಇಂದು ಮೂಲದೇವರಿಗೆ ಪಂಚಾಮೃತ ಅಭಿಷೇಕದ ಬಳಿಕ ಪ್ರತ್ಯಕ್ಷವಾದ ನಾಗ ಎಂಬುವುದಾಗಿ ಮಾಹಿತಿ ಇದೆ. ಗರ್ಭಗುಡಿಯೊಳಗಿನ ಹುತ್ತದಿಂದ ಹೊರ ಬಂದ ನಾಗ ಎಂದೂ ಹೇಳಲಾಗುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಇಂದು ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

Also Read  ಕ್ರೀಡಾ ತರಬೇತಿ ಕೇಂದ್ರ – ಅರ್ಜಿ ಆಹ್ವಾನ

error: Content is protected !!
Scroll to Top