ಬೆಳ್ತಂಗಡಿ-ಮಂಗಳೂರು ರಾ. ಹೆದ್ದಾರಿಗೆ ಉರುಳಿದ ಬೃಹತ್ ಗಾತ್ರದ ಮರ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ: ಜು.17, ಕೊರೋನಾ ಅಟ್ಟಹಾಸದ ನಡುವೆ ವರುಣನ ಅಬ್ಬರ ಹೆಚ್ಚಾಗುತ್ತಿದ್ದು, ಬೆಳ್ತಂಗಡಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜೈನ್ ಪೇಟೆಯ ಮಾಜಿ ಶಾಸಕ ವಸಂತ ಬಂಗೇರ ನಿವಾಸದ ಎದುರು ಬೃಹತ್ ಗಾತ್ರದ ಮರ ಬಿದ್ದುದ್ದರಿಂದ ಕೆಲ‌ ಸಮಯ ಸಂಚಾರಕ್ಕೆ ತೊಡಕು ಉಂಟಾಗಿದೆ.

ರಭಸದಿಂದ ಬೀಸಿದ ಗಾಳಿಯ ಹೊಡೆತಕ್ಕೆ 2 ವಿದ್ಯುತ್ ಕಂಬ ಕೂಡಾ ಮುರಿದು ಬಿದ್ದು, ಟ್ರಾಫಿಕ್ ಪೋಲಿಸ್, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!

Join the Group

Join WhatsApp Group