?? ?ig Breaking News ದಕ್ಷಿಣ ಕನ್ನಡದಲ್ಲಿ ಕೊರೋನಾ ರುದ್ರ ತಾಂಡವ ➤ ಇಂದೂ ಓರ್ವರನ್ನು ಬಲಿ ಪಡೆದ ಕೊರೋನಾ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.7, ಮಹಾಮಾರಿ ಕೊರೋನಾವು ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರೂಪವನ್ನು ಮುಂದುವರೆಸುತ್ತಿದ್ದು, ಇಂದು ಕೂಡಾ ಮಂಗಳೂರಿನಲ್ಲಿ ಓರ್ವ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ.

ನಗರದ ಹೊರವಲಯದ ಮೂಡಬಿದ್ರೆ ನಿವಾಸಿ 53 ವರ್ಷ ಪ್ರಾಯದ ವ್ಯಕ್ತಿ. ಇವರು ಕೊರೋನಾ ಸೊಂಕಿನಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮೃತರಾಗಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಕೊರೋನಾ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

error: Content is protected !!
Scroll to Top