ಸುಬ್ರಹ್ಮಣ್ಯ: ರಸ್ತೆಗೆ ಬಿದ್ದ ಬೃಹತ್ ಬಿದಿರು ಹಿಂಡು ತಲೂರು ಸ್ನೇಹ ಯುವ ಬಳಗದ ಸದಸ್ಯರಿಂದ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.04. ಸುಳ್ಯ – ಸುಬ್ರಹ್ಮಣ್ಯ ರಸ್ತೆಯ ಎಲಿಮಲೆ ಸಮೀಪದ ತಲೂರು ಎಂಬಲ್ಲಿ ರಸ್ತೆಗಡ್ಡವಾಗಿ ಬಿದ್ದ ಬೃಹತ್ ಬಿದಿರು ಹಿಂಡನ್ನು ತಲೂರು ಮೆತ್ತಡ್ಕದ ಸ್ನೇಹ ಯುವ ಬಳಗದ ಸದಸ್ಯರು ತೆರವುಗೊಳಿಸಿದರು.

ಲಾರಿಯನ್ನು ನಿಲ್ಲಿಸಿ ಅದರ ಮೇಲೇರಿ ಬಿದಿರು ಹಿಂಡನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಜಯಂತ್ ತಲೂರ್, ದುರ್ಗಾದಾಸ್ ಮೆತ್ತಡ್ಕ, ವರ್ಷಿತ್ ಪಿ.ಪಿ., ಯತೀಶ್ ತಲೂರು, ಜೀವನ್ ಪಿ., ದಯಾನಂದ ಮೆತ್ತಡ್ಕ, ದಾಮೋದರ ಅಂಬೆಕಲ್ಲು, ಓಂ ಪ್ರಸಾದ್ ಕಜೆ ಮೊದಲಾದವರು ಸಹಕರಿಸಿದರು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನ ಚಂಪಾಷಷ್ಠಿ ಉತ್ಸವ ಸಭೆ

error: Content is protected !!
Scroll to Top