ಕಡಬದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ‼️➤ ಕಾಡು ಬಿಟ್ಟು ಹೆದ್ದಾರಿಗೆ ಬಂದ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಪಂಜದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸೆರೆಹಿಡಿಯಲು ಸಿದ್ಧತೆ ನಡೆದಿರುವಾಗಲೇ, ಇದೀಗ ಮರ್ಧಾಳದಲ್ಲೂ ಚಿರತೆಯನ್ನು ಕಂಡು ಭಯಭೀತರಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಬಸ್ ನಿಲ್ದಾಣದ ಬಳಿ ರಾತ್ರಿ 8.45 ರ ಸುಮಾರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಅಂಗಡಿ ಬಂದ್ ಮಾಡಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗಳಿಬ್ಬರು ಚಿರತೆಯನ್ನು ಗಮನಿಸಿ ನ್ಯೂಸ್ ಕಡಬಕ್ಕೆ ಮಾಹಿತಿ ನೀಡಿದ್ದಾರೆ. ವರ್ಷದ ಹಿಂದೆ ಮರ್ಧಾಳದ ನೀರಾಜೆ ಎಂಬಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿತ್ತು.

error: Content is protected !!

Join the Group

Join WhatsApp Group