ಕಡಬದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ‼️➤ ಕಾಡು ಬಿಟ್ಟು ಹೆದ್ದಾರಿಗೆ ಬಂದ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಪಂಜದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸೆರೆಹಿಡಿಯಲು ಸಿದ್ಧತೆ ನಡೆದಿರುವಾಗಲೇ, ಇದೀಗ ಮರ್ಧಾಳದಲ್ಲೂ ಚಿರತೆಯನ್ನು ಕಂಡು ಭಯಭೀತರಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಬಸ್ ನಿಲ್ದಾಣದ ಬಳಿ ರಾತ್ರಿ 8.45 ರ ಸುಮಾರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಅಂಗಡಿ ಬಂದ್ ಮಾಡಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗಳಿಬ್ಬರು ಚಿರತೆಯನ್ನು ಗಮನಿಸಿ ನ್ಯೂಸ್ ಕಡಬಕ್ಕೆ ಮಾಹಿತಿ ನೀಡಿದ್ದಾರೆ. ವರ್ಷದ ಹಿಂದೆ ಮರ್ಧಾಳದ ನೀರಾಜೆ ಎಂಬಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿತ್ತು.

Also Read  ಬ್ಯಾಂಕಿಂಗ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ

error: Content is protected !!
Scroll to Top