ಕಡಬ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಬಡ ಮಹಿಳೆಯ ಮನೆ ರಿಪೇರಿ

(ನ್ಯೂಸ್ ಕಡಬ)newskadaba.com ಕಡಬ, ಜೂ.24, ತಾಲೂಕಿನ ಹಳೆಸ್ಟೇಷನ್ ಸಮೀಪದ ಬಡ ಮಹಿಳೆಯೋರ್ವರ ಮನೆ ರಿಪೇರಿಯು ಕರ್ಣಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕಡಬ ತಾಲೂಕು ಅಧ್ಯಕ್ಷರಾದ ಜಲೀಲ್ ಬೈತಡ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಸಿಫ್ ಹಾಜಿ ತಂಬುತ್ತಡ್ಕ, ನಾಸಿರ್ ಕುರಿಮಲೆ ನಿಡ್ಪಳ್ಳಿ, ವಸಂತ ನಿಡ್ಪಳ್ಳಿ, ಶಶಿ ಇರ್ದೆ, ಕಡಬ ತಾಲೂಕು ಕಾರ್ಯದರ್ಶಿ ಫೈಝಲ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group