ಮತ್ತೆ ಸುದ್ದಿಯಾಯಿತು ನೇತ್ರಾವತಿ ➤ ಯುವಕನೋರ್ವ ನದಿಗೆ ಹಾರಿರುವ ಶಂಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.19, ನಗರದ ಹೊರವಲಯದ ಜೆಪ್ಪಿನಮೊಗರು ಬಳಿ ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ನದಿಯ ಬಳಿ ನೂರಾರು ಜನ ಜಮಾವಣೆಗೊಂಡಿದ್ದಾರೆನ್ನಲಾಗಿದೆ. ನದಿಗೆ ಹಾರಿದವರ ಬಗ್ಗೆ ಮಾಹಿತಿ ಇನ್ನೂ ತಿಳಿದುಬಂದಿಲ್ಲ, ಸಂಜೆ 4:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಧಾವಿಸಿದ್ದಾರೆ. ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದು, ಕಳೆದ ವಾರ ಇಲ್ಲಿ ಮುಡಿಪು ನಿವಾಸಿ ಯುವಕನೊಬ್ಬ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದ ಕಥೆ ಕಟ್ಟಿದ ಬಳಿಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದ ಘಟನೆ ನಡೆದಿತ್ತು. ಮತ್ತೆ ಇದೀಗ ವ್ಯಕ್ತಿಯೊಬ್ಬ ನದಿಗೆ ಹಾರಿರುವ ಸುದ್ದಿ ಬಹಳ ಕುತೂಹಲ ಕೆರಳಿಸಿದೆ.

Also Read  ನೀತಿ ತಂಡದ ಕಡಬ ಸಮಿತಿ ಅಧ್ಯಕ್ಷರಾಗಿ ರಂಜಿತ್ ಎಂ.ಎ. ಆಯ್ಕೆ ► ಕಾರ್ಯದರ್ಶಿಯಾಗಿ ನವೀನ್ ಗೋಖಲೆ

error: Content is protected !!
Scroll to Top