ನಾಪತ್ತೆಯಾಗಿದ್ದ ಪೆರುವಾಯಿಯ ಯುವತಿ ಬೆಂಗಳೂರಿನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com.ವಿಟ್ಲ,ಜೂ.16:ನಾಪತ್ತೆಯಾಗಿದ್ದ ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ ಜ್ಯೋತಿ ತನ್ನ ಪ್ರಿಯಕರನ ಜತೆ ಬೆಂಗಳೂರಿನಲ್ಲಿರುವುದನ್ನು ವಿಟ್ಲ ಪೋಲಿಸರು ಪತ್ತೆ ಹಚ್ಚಿದ್ದಾರೆ.


ಮೇ 29 ರಂದು ಜ್ಯೋತಿ ತನ್ನ ಸ್ನೇಹಿತೆ ಶ್ರೇಯಾ ಜತೆ ತೆರಳಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಭಾಸ್ಕರ ಅವರು ವಿಟ್ಲ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಕಲಿಸಿಕೊಂಡ ವಿಟ್ಲ ಪೋಲಿಸರು ಜ್ಯೋತಿ ಬೆಂಗಳೂರಿನಲ್ಲಿ ತನ್ನ ಪ್ರಿಯಕರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಿರಣ್ ಜೊತೆ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿದ ವಿಟ್ಲ ಠಾಣಾಧಿಕಾರಿ ವಿನೋದ್ ಎಸ್.ಕೆ ನೇತೃತ್ವದ ಪೋಲಿಸರ ತಂಡ ಬೆಂಗಳೂರಿನ ಮಾರತ್ತಿಹಳ್ಳಿಯಲ್ಲಿ ಪತ್ತೆ ಹಚ್ಚಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 542 ಜನರಿಗೆ ಸೋಂಕು ದೃಢ

error: Content is protected !!
Scroll to Top