ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು. ಜೂ. 14, ವಿದ್ಯುತ್ ಶಾಕ್ ತಗುಲಿ ಯುವಕರೋರ್ವರು ಮೃತಪಟ್ಟ ಘಟನೆ ತಾಲೂಕಿನ ಕೈಯೂರಿನಿಂದ ವರದಿಯಾಗಿದೆ.

ಮೃತರನ್ನು ಕೈಯೂರು ಉದ್ದೋಳೆ ಕಾಂಪ್ಲೆಕ್ಸ್ ಮಾಲಕ ರಮೇಶ್ ಗೌಡ ಎಂದು ತಿಳಿದು ಬಂದಿದೆ. ಇವರು ತನ್ನ ತೋಟದಲ್ಲಿರುವ ಪಂಪ್ ಅನ್ನು ಚಾಲು ಮಾಡಲು ಸ್ವಿಚ್ ಹಾಕುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಇವರು ಕೈಯೂರು ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರೂ ಆಗಿದ್ದರು.

error: Content is protected !!

Join the Group

Join WhatsApp Group