ವಿಮಾನರದ್ದು ಕುವೈತ್ ಕನ್ನಡಿಗರಿಗೆ ಮತ್ತೆ ನಿರಾಶೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.9:ಕೋವಿಡ್ ಹಿನ್ನೆಲೆಯಲ್ಲಿ ಕುವೈಟ್‍ನಿಂದ ರಾಜ್ಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಮತ್ತೆ ನಿರಾಶೆಯಾಗಿದೆ. ಕುವೈಟ್‍ನಿಂದ ಬೆಂಗಳೂರಿಗೆ ಜೂ. 16ಕ್ಕೆ ನಿಗದಿಯಾಗಿದ್ದ ವಿಮಾನ ಸಂಚಾರ ರದ್ದುಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್‍ನಿಂದಾಗಿ ಕುವೈಟ್‍ನಲ್ಲಿ ಸಿಲುಕಿದ್ದ ಕನ್ನಡಿಗರಿಗೆ ವಂದೇ ಭಾರತ್ ಮಿಷನ್‍ನಡಿ ಏರ್‍ಲಿಫ್ಟ್ ಮಾಡಬೇಕೆಂದು ಅಲ್ಲಿನ ಕನ್ನಡಿಗರ ಆಗ್ರಹವಾಗಿತ್ತು.ಇದರಂತೆ ಸಂಕಷ್ಟದಲ್ಲಿದ್ದ ದವರರನ್ನು ಬೆಂಗಳೂರಿಗೆ ಕರೆತರಳು ಜೂ. 16 ಕ್ಕೆ ಗಡುವು ನೀಡಲಾಗಿತ್ತು ಆದರೆ ಇದೀಗ ಮತ್ತೆ ತಾಂತ್ರಿಕ ಸಮಸ್ಯೆಯಿಂದ ಈ ವಿಮಾನ ರದ್ದಾಗಿದೆ ಎಂದು ಕುವೈಟ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Also Read  ಪುತ್ತೂರಿನಲ್ಲಿ ಇಂದು ಮೂವರಲ್ಲಿ ಕೋವಿಡ್ ದೃಢ

error: Content is protected !!
Scroll to Top