ಪುತ್ತೂರು: ? ನೀರಿನಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಎ.10. ಚಾಪೆ ತೊಳೆಯಲೆಂದು ಕಲ್ಲಿನ ಕೋರೆಯ ಹಳ್ಳಕ್ಕೆ ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಅಪರಾಹ್ನ ಪುತ್ತೂರಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ವಿಟ್ಲ ರಾದುಕಟ್ಟೆ ನಿವಾಸಿ ಅಡಕೆ ವ್ಯಾಪಾರಿ ಅಹ್ಮದ್ ಕುಂಞಿ ಹಾಜಿ ಎಂಬವರ ಪುತ್ರ ಅಬ್ದುಲ್ ರಝಾಕ್ (43) ಎಂದು ಗುರುತಿಸಲಾಗಿದೆ. ಮೃತರು ಪುತ್ತೂರಿನ ತನ್ನ ಸಹೋದರಿಯ ಮನೆಯಲ್ಲಿದ್ದು, ಶುಕ್ರವಾರ ಅಪರಾಹ್ನ ಚಾಪೆ ತೊಳೆಯಲೆಂದು ಮನೆ ಸಮೀಪದ ದರ್ಬೆ ಹೋನೆಸ್ಟ್ ಕೋರೆಯ ಹಳ್ಳಕ್ಕೆ ಹೋದವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದು, ರಾತ್ರಿ ವೇಳೆಗೆ ಮೃತದೇಹ ಪತ್ತೆಯಾಗಿದೆ.

Also Read  ➤ ವಿಶೇಷ ಲೇಖನ ಕೋವಿಡ್-19 ಕಟು ಸತ್ಯಗಳು ✍? ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top