ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮಹಿಮೆ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿನ ಪವಿತ್ರ ಆಧ್ಯಾತ್ಮಿಕ ಕ್ಷೇತ್ರವಿದು. ನಾಗ ನಾಗದೋಷಕ್ಕೆ ಸಂಬಂಧಪಟ್ಟ ಪೂಜಾ ಪರಿ ಕ್ರಮಗಳಿಗೆ ದೇಶದಲ್ಲೆಡೆ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಸುಂದರವಾದ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕುಮಾರ ಪರ್ವತದಲ್ಲಿ ಈ ಕ್ಷೇತ್ರ ಕಾಣಬಹುದು.

ಗರುಡನ ಬೆದರಿಕೆಯಿಂದ ದೈವಿಕ ಸರ್ಪ ವಾಸುಕಿ ಮತ್ತು ಇತರ ಸರ್ಪಗಳ ರಕ್ಷಣೆಗೆ ಸುಬ್ರಹ್ಮಣ್ಯ ಆಶ್ರಯ ನೀಡುವರು ಎಂಬ ಪ್ರತೀತಿ ಇದೆ.

ಶೇಷ ಪರ್ವತ ಅಂದರೆ ಆರು ತಲೆಯ ಸರ್ಪದ ಆಕಾರದಲ್ಲಿನ ಪರ್ವತ ಬಹು ರಮಣೀಯವಾಗಿ ಕಾಣುತ್ತದೆ. ಕುಮಾರಧಾರಾ ನದಿಯ ದಡದಲ್ಲಿ ಈ ಪುಣ್ಯಕ್ಷೇತ್ರ ಕಂಡುಬರುವುದು. ಈ ನದಿಯು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರಕ್ಕೆ ಸೇರುತ್ತದೆ.

ದೇವಾಲಯ ಪ್ರದೇಶದಲ್ಲಿ ಗರುಡ ಸ್ಥಂಭ ಇದೆ ಇದು ಇಲ್ಲಿ ವಾಸಿಸುವ ವಾಸುಕಿಯಿಂದ ಉಂಟಾಗುವ ವಿಷಕಾರಿ ಜ್ವಾಲೆಗಳಿಂದ ರಕ್ಷಿಸಲು ಈ ಸ್ತಂಭವನ್ನು ಇಲ್ಲಿ ಇರಿಸಲಾಗಿದೆ ಎಂಬ ನಂಬಿಕೆ ಉಂಟು.

ಮೊದಲು ಸುಬ್ರಹ್ಮಣ್ಯ ಮತ್ತು ವಾಸುಕಿ ದೇವರನ್ನು ನೋಡಬಹುದು ಮುಂದಿನ ಹಂತದಲ್ಲಿ ಶೇಷ ದೇವತೆ ಕಾಣಬಹುದು. ಈ ದೇಗುಲವನ್ನು ಕೇರಳಿಯ ಶೈಲಿಯ ವಾಸ್ತು ಶಿಲ್ಪದಲ್ಲಿ ನಿರ್ಮಿಸಲಾಗಿದೆ.

ಇಲ್ಲಿ ಆಶ್ಲೇಷ ಬಲಿ ಪೂಜೆ, ಸರ್ಪಸಂಸ್ಕಾರ, ನಾಗದೋಷ ಗಳನ್ನು ಹೋಗಲಾಡಿಸಲು ಪ್ರಮುಖವಾಗಿ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಜಾತಕದಲ್ಲಿನ ಕುಜದೋಷಕ್ಕೆ, ಮದುವೆಯಲ್ಲಿನ ವಿಳಂಬದ ಸಮಸ್ಯೆಗೆ, ಮಾಂಗಲ್ಯ ದೋಷಕ್ಕೆ ಮತ್ತು ಸಂತಾನ ದೋಷಕ್ಕೆ ಸಂಬಂಧಪಟ್ಟ ಪರಿಹಾರಕ್ಕಾಗಿ ಈ ಕ್ಷೇತ್ರವನ್ನು ಭೇಟಿ ನೀಡಬಹುದು ಹಾಗೂ ಇದರ ಪ್ರತ್ಯಕ್ಷ ಫಲಕಾರಿ ಅಂಶಗಳನ್ನು ಭಕ್ತಾದಿಗಳು ಪಡೆಯುತ್ತಿರುವುದು ಉಂಟು. ನಿಮ್ಮಲ್ಲಿ ಹೆಚ್ಚು ಸಂಕಷ್ಟಗಳು ಮೇಲ್ಕಂಡ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ನೀವು ಸಹ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಒಳಿತಾಗುತ್ತದೆ.
ಶುಭ ಮಸ್ತು

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಹಾಗೂ ತಂತ್ರ ವಿದ್ಯೆಗಳ ಮೂಲಕ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group