ಪೊಲೀಸರಿಂದ ತಪ್ಪಿಸಲು ಹೋಗಿ ಬೈಕ್-ಲಾರಿ ಢಿಕ್ಕಿ: ಇಬ್ಬರು ಮೃತ್ಯು

ತರೀಕೆರೆ, ಫೆ.25: ದಂಡದ ಭಯದಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಾಲನೆ ಮಾಡಿದ ಪರಿಣಾಮ ಬೈಕೊಂದು ಟಿಪ್ಪರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕುಮಾರ್ (30) ಮತ್ತು ಮೋಹನ್ (30) ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ಶಿವಮೊಗ್ಗದಿಂದ ಲಕ್ಕವಳ್ಳಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಲಕ್ಕವಳ್ಳಿ ಡ್ಯಾಂ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ಯುವಕರಿದ್ದ ಮೋಟಾರ್ ಬೈಕೊಂದು ವೇಗವಾಗಿ ಬಂದಿದೆ. ಈ ವೇಳೆ ಪೊಲೀಸರು ಅಡ್ಡಹಾಕಿದರೂ ತಪ್ಪಿಸಿಕೊಂಡ ಅವರು ವೇಗವಾಗಿ ಮುಂದೆ ಸಾಗಿದ್ದಾರೆ. ಇದೇ ಸಂದರ್ಭ ಇವರ ಬೈಕ್, ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಅವರು ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Also Read  ನಿಯಂತ್ರಣ ತಪ್ಪಿದ ಲಾರಿ ಬಸ್ಸಿಗೆ ಢಿಕ್ಕಿ► ಇಬ್ಬರ ದುರ್ಮರಣ

error: Content is protected !!
Scroll to Top