ಮಂಗಳೂರು ಪೊಲೀಸರ ದೌರ್ಜನ್ಯ ವಿರುದ್ದ ತೀವ್ರ ಪ್ರತಿರೋಧ



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಡಿ.28. ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು
ಇದರ ವತಿಯಿಂದ ಮಂಗಳೂರಿನಲ್ಲಿ ನಡೆದ ಪೋಲೀಸ್ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿರೋಧ ಮತ್ತು ಕರಪತ್ರ ಪ್ರದರ್ಶನ ಶುಕ್ರವಾರ ಜುಮಾ ಬಳಿಕ
ಮಸ್ಜಿದ್ ವಠಾರ ತೆಕ್ಕಾರುನಲ್ಲಿ ನಡೆಯಿತು.







Nk Kukke

ಜಮಾಅತ್ ಆಡಳಿತ ಸಮಿತಿ ಸದಸ್ಯ ಉಸ್ಮಾನ್ ಸಹದಿ ತೆಕ್ಕಾರು ಖಂಡನಾ ಬಾಷಣ ನಡೆಸಿದರು. ಸ್ಥಳೀಯ ಖತೀಬ್ ಅಬ್ದುಲ್ ರವೂಫ್ ಅಹ್ಸನಿ ಕಾಸರಗೋಡು ಪ್ರಸ್ತುತ ಪೋಲೀಸ್ ಗೋಲಿಬಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಎಂ ತೆಕ್ಕಾರು ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ಟಿ.ಹೆಚ್ ಸ್ವಾಗತಿಸಿ ವಂದಿಸಿದರು. ಕೆ.ಪಿ. ಬಾತಿಶ್ ತೆಕ್ಕಾರು ನಿರೂಪಿಸಿದರು.






error: Content is protected !!
Scroll to Top