ರೆಂಜಿಲಾಡಿ: ಭಜನಾ ಮಹಾಮಂಡಲ ಆಮಂತ್ರಣ ಪತ್ರಿಕೆ ವಿತರಣೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.28   ಪುತ್ತೂರು ತಾಲೂಕಿನ ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಡಿ.29ರಂದು ನಡೆಯಲಿರುವ ಭಜನಾ ಮಹಾಮಂಡಲದ ಆಮಂತ್ರಣ ಪತ್ರಿಕೆಯನ್ನು ರೆಂಜಿಲಾಡಿ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದಲ್ಲಿ ಗುರುಸ್ವಾಮಿ ರವೀಂದ್ರನ್ ಅವರಿಗೆ ಕಡಬ ತಾಲೂಕು ಭಜನಾ ಮಹಾಮಂಡಲದ ಸಂಯೋಜಕ ಉಮೇಶ್ ಶೆಟ್ಟಿ ಸಾಯಿರಾಮ್ ವಿತರಿಸಿದರು.

ಈ ಸಂದರ್ಭದಲ್ಲಿ ಧರ್ಮಶಿಖರದ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಪದಕ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Scroll to Top