ವಿದ್ಯುತ್ ಶಾಕ್ ನೀಡಿ ವ್ಯಕ್ತಿಯ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.22. ಕಳ್ಳತನದ ಆರೋಪದ ಮೇಲೆ ಕರೆಂಟ್ ಶಾಕ್ ಕೊಟ್ಟು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೇಕೊಳಾಲದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಬಷೀರ್‍ ಕೊಲೆಯಾದ ವ್ಯಕ್ತಿ. ಈತನಿಗೆ ನಾಲ್ವರು ದುಷ್ಕರ್ಮಿಗಳು ಬೆಳಗಿಂದ ಸಂಜೆಯವರೆಗೂ ಕಿರುಕುಳ ನೀಡಿ, ನಂತರ ಆತನನ್ನ ಕೊಲೆ ಮಾಡಿದ್ದು, ಜತೆಗಾರರಿಬ್ಬರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಬಷೀರ್ ಒಂದು ವರ್ಷದ ಹಿಂದೆ ಮದುವೆಯಾಗಿದ್ದು ಪಶ್ಚಿಮ ಬಂಗಾಳದಿಂದ ಗುಜರಿ ಕೆಲಸ ಹುಡುಕಿಕೊಂಡು 2 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದನೆನ್ನಲಾಗಿದೆ. ವಾಟರ್ ಟ್ಯಾಂಕರ್ ಮಾಲೀಕ ಬಸುರೆಡ್ಡಿ ಎಂಬವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಇವರೆಲ್ಲರೂ ವಾಸ ಮಾಡುತ್ತಿದ್ದರು. ಗಂಭೀರವಾಗಿ ಗಾಯಗೊಂಡಿರುವ ಹಫೀಸುಲ್ಲಾ ಹಾಗೂ ಅಜ್ಮಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸುರೆಡ್ಡಿ ಹಾಗೂ ತಂಡ ಈ ಕೃತ್ಯ ಎಸಗಿದೆಯೆಂದು ಹೇಳಲಾಗಿದ್ದು, ಮಾರತಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

error: Content is protected !!
Scroll to Top