ಇಂದು ಬಾಬರಿ ಧ್ವಂಸ ದಿನ: ದ.ಕ‌. ಜಿಲ್ಲಾದ್ಯಂತ ಕಟ್ಟೆಚ್ಚರ

ಮಂಗಳೂರು, ಡಿ.6: ಬಾಬರಿ ಧ್ವಂಸ ದಿನವಾದ ಡಿ.6ರಂದು ದ.ಕ. ಜಿಲ್ಲಾದ್ಯಂತ ಭಾರೀ ಕಟ್ಟೆಚ್ಚರ ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.

ಅಯೋಧ್ಯೆ ಭೂ ವಿವಾದ ತೀರ್ಪು ಬಂದ ಹಿನ್ನೆಲೆಯಲ್ಲಿ ತೀರ್ಪಿನ ವಿರುದ್ಧ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ಕೆಲವು ಸಂಘಟನೆಗಳು ಕರಾಳ ದಿನವಾಗಿ ಮತ್ತು ಕೆಲವು ಸಂಘಟನೆಗಳು ವಿಜಯೋತ್ಸವಾಗಿ ಆಚರಿಸುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯಲ್ಲಿ ಯವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Also Read  ಮಂಗಳೂರು ಗೋಲಿಬಾರ್ ಪ್ರಕರಣ: ಹಾಲಿ ನ್ಯಾಯಾಧೀಶರಿಂದ ತನಿಖೆ ಒತ್ತಾಯಿಸಿ ನಾಳೆ ಧರಣಿ

ಅಲ್ಲದೆ ಸೆಕ್ಷನ್ 144 ಡಿ.6ರಿಂದ ಡಿ.7ರವೆರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

error: Content is protected !!
Scroll to Top