ಪಂಜ ಕಂದಾಯ ನಿರೀಕ್ಷಕ ಡಿ.ಟಿ. ದಯಾನಂದ್ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ.21. ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕ ಡಿ.ಟಿ. ದಯಾನಂದರನ್ನು ಲಂಚ ತೆಗೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಪೊಲೀಸರು ಬಂಧಿಸಿದ ಘಟನೆ ಸೋಮವಾರ ಸಂಜೆ ಸುಳ್ಯದಲ್ಲಿ ನಡೆದಿದೆ.

94ಸಿ ಅರ್ಜಿಯ ಫಲಾನುಭವಿ ಮುರುಳ್ಯದ ಹರೀಶ್ ಕುಲಾಲ್ ರವರಿಂದ 8 ಸಾವಿರ ರೂ.ಗಳನ್ನು ಲಂಚದ ಬೇಡಿಕೆಯಿಟ್ಟ ಮೇರೆಗೆ ಹರೀಶ್ ರವರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ಇಂದು ಸಂಜೆ ಸುಳ್ಯದ ಸಂತೃಪ್ತಿ ಹೊಟೇಲಿನಲ್ಲಿ ಡಿ.ಟಿ. ದಯಾನಂದರು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ಸ್ ಪೆಕ್ಟರ್ ಯೋಗೀಶ್ ಕುಮಾರ್, ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ, ರಾಧಾಕೃಷ್ಣ ಡಿ.ಎ., ಪ್ರಶಾಂತ್ ಎಂ., ಉಮೇಶ್, ಕಾನ್ಸ್ ಟೇಬಲ್ ಗಳಾದ ವೈಶಾಲಿ, ಗಣೇಶ್ ಹಾಗೂ ರಾಕೇಶ್ ಪಾಲ್ಗೊಂಡಿದ್ದರು.

error: Content is protected !!
Scroll to Top