ಮಂಗಳೂರು: ಯುವಕನಿಗೆ ಇರಿದು ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.30. ಬರ್ಬರವಾಗಿ ಇರಿದು ಕೊಲೆಗೈದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹವೊಂದು ನಗರದ ಹೊರವಲಯದ ತೊಕ್ಕೊಟ್ಟು ಬಳಿ ಕಂಡುಬಂದಿದೆ.

ತೊಕ್ಕೊಟ್ಟು ಕಾಪಿಕಾಡ್ ನ ರೈಲ್ವೆ ಹಳಿ ಸಮೀಪ ಯುವಕನ ಮೃತದೇಹ ಪತ್ತೆಯಾಗಿದ್ದು, ಬೆನ್ನು ಮತ್ತು ಎದೆಗೆ ಇರಿದ ಗಾಯಗಳು ಕಂಡುಬಂದಿದೆ. ಘಟನೆಯು ಇಂದು ನಡೆದಿರಬಹುದೆಂದು ಶಂಕಿಸಲಾಗಿದೆ‌. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಯಾರು, ಯಾಕಾಗಿ ಕೊಂದರೆಂದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.

Also Read  ಪ್ರಾಣಕ್ಕೆ ಕಂಟಕವಾದ ಮೀನು ಸಾಗಾಟದ ಲಾರಿ - ಮೀನಿನ ಬಾಕ್ಸ್ ಬಿದ್ದು ಸ್ಕೂಟರ್ ಸವಾರ ಮೃತ್ಯು..!

error: Content is protected !!
Scroll to Top