(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ನಿಶ್ಚಿತಾರ್ಥಕ್ಕೆಂದು ಹೋದವರು ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂದಾಧರ ಕೆ ಮಣಿಯಾಣಿ, (55) ಎಂಬವರು ಸೆಪ್ಟೆಂಬರ್ 20 ರಂದು ಕಾಸರಗೋಡು, ನೀಲೇಶ್ವರದಲ್ಲಿ ಕಾಣೆಯಾದ ವ್ಯಕ್ತಿ. ಇವರ ಎತ್ತರ 5.2 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಧರಿಸಿದ ಬಟ್ಟೆ ಗುಲಾಬಿ ಕೆಂಪು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್, ಭಾಷೆ ಕನ್ನಡ, ಮಳಿಯಾಳಿ, ಕೊಂಕಣಿ, ತುಳು ಮಾತಾಡುತ್ತಾರೆ.ಈ ಚಹರೆಯುಳ್ಳ ವ್ಯಕ್ತಿಯ ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು, ಮಂಗಳೂರು ಪೂರ್ವ ಠಾಣೆ, ದೂರವಾಣಿ ಸಂಖ್ಯೆ : 2220520 ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ಸಂಖ್ಯೆ :2220800-2220801 ಮಂಗಳೂರು ಮಾಹಿತಿ ನೀಡಬಹುದು ಎಂದು ಮಂಗಳೂರು ಪೂರ್ವ ಪೊಲೀಸ್ ಠಾಣೆ, ಕದ್ರಿ ಇವರ ಪ್ರಕಟಣೆ ತಿಳಿಸಿದೆ.










