ಸೆ.24ರಿಂದ 28.09.2019ರವರೆಗೆ ಬಿಹಾರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟಕ್ಕೆ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿನೋದ್ ಪಿ ಟಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.11.ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ವಿದ್ಯಾಭಾರತಿ ಪ್ರಾಂತ ಮಟ್ಟ ಮತ್ತು ವಿದ್ಯಾಭಾರತಿ ಕ್ಷೇತ್ರಿಯ ಮಟ್ಟದಲ್ಲಿ ಭಾಗವಹಿಸಿದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ 9ನೇ ತರಗತಿ ವಿನೋದ್ ಪಿ ಟಿ.

ದಿನಾಂಕ 24.09.2019ರಿಂದ 28.09.2019ರವರೆಗೆ ಬಿಹಾರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟಕ್ಕೆ ವಿನೋದ್ ಪಿ ಟಿ  ಆಯ್ಕೆಯಾಗಿರುತ್ತಾರೆ. ಇವರು ಕಡಬ ತಾಲೂಕು ಎಡಮಂಗಲ ಗ್ರಾಮದ ಶ್ರೀ ತೀರ್ಥಕುಮಾರ್ ಮತ್ತು ಶ್ರೀಮತಿ ವಿಮಲ ದಂಪತಿಯ ಪುತ್ರ.ಕಡಬದ ಕಬಡ್ಡಿ ತರಬೇತುದಾರ ಶೇಖರ ಪೂಜಾರಿ, ದೈಹಿಕ ಶಿಕ್ಷಕರಾದ ಲಕ್ಷ್ಮೀಶ ಗೌಡ, ಶಿಕ್ಷಕ ಶಿವಪ್ರಸಾದ್ ರಾವ್ ಮಾರ್ಗದರ್ಶನ ನೀಡಿರುತ್ತಾರೆ. ಆಡಳಿತಮಂಡಳಿ, ಶಿಕ್ಷಕವೃಂದ ಸಹಕರಿಸಿದ್ದಾರೆ.

error: Content is protected !!
Scroll to Top