ಕಡಬ ಗಣೇಶ್ ಬಿಲ್ಡಿಂಗ್‍ನಲ್ಲಿ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ.15. ಇಲ್ಲಿನ ಮುಖ್ಯರಸ್ತೆಯ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು. ಗಣೇಶ ಬಿಲ್ಡಿಂಗ್ ಮಾಲಕರಾದ ಸುಂದರ ಗೌಡ ಮಂಡೆಕರ ಧ್ವಜಾರೋಹಣಗೈದರು. ಅತಿಥಿಯಾಗಿ ಪರಿವರ್ತನಾ ಸುದ್ದಿ ಮಾಲಕರಾದ ಜನಾರ್ದನ ಯಶ್ ಪುರಿಯ ಉಪಸ್ಥಿತರಿದ್ದರು. ಹಿಂಜಾವೇ ಪುತ್ತೂರು ಜಿಲ್ಲಾ ಸಹ ಸಂಚಾಲಕರಾದ ಮೋಹನ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ಕಡಬ ಕದಂಬ ಘಟಕದ ಕಾರ್ಯದರ್ಶಿ ದಿವಾಕರ ಯಂ ವಂದಿಸಿದರು.

 

error: Content is protected !!

Join the Group

Join WhatsApp Group