ಅರ್ಕುಳ: ಬೈಕ್, ರಿಕ್ಷಾ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.12. ಇಲ್ಲಿಗೆ ಸಮೀಪದ ಅರ್ಕುಳ ಎಂಬಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಹಾಗೂ ಬೈಕ್ ಬೆಂಕಿಗಾಹುತಿಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಅರ್ಕುಳ ಕೋಟೆಪುರ ನಿವಾಸಿ ಎ.ಕೆ.ರಹ್ಮತುಲ್ಲಾ ಎಂಬವರಿಗೆ ಸೇರಿದ ಅಟೋರಿಕ್ಷಾ ಮತ್ತು ಅವರ ಸಹೋದರರಾದ ಎ.ಕೆ.ಅನ್ಸಾರ್ ಅಲಿ, ಎಕೆ ಹಾಶಿರ್ ಅಲಿ ಎಂಬವರಿಗೆ ಸೇರಿದ ದ್ವಿಚಕ್ರ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಅವರು ಎಂದಿನಂತೆ ತಮ್ಮ ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದರೆನ್ನಲಾಗಿದೆ. ತಡರಾತ್ರಿ ನೆರೆಕರೆಯವರು ವಾಹನಕ್ಕೆ ಬೆಂಕಿ ಹೊತ್ತಿದ್ದನ್ನು ಕಂಡು ರಹ್ಮತುಲ್ಲಾರವರ ಗಮನಕ್ಕೆ ತಂದಿದ್ದಾರೆ. ನಂತರ ಊರವರು ಸೇರಿ ಬೆಂಕಿ ನಂದಿಸುವಷ್ಟರಲ್ಲಿ ಆಟೋ ರಿಕ್ಷಾ ಸಂಪೂರ್ಣ ಭಸ್ಮವಾಗಿತ್ತು. ದ್ವಿಚಕ್ರ ವಾಹನಕ್ಕೂ ಬೆಂಕಿಯಿಂದ ಹಾನಿಯಾಗಿದೆ ಎನ್ನಲಾಗಿದ್ದು,
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top