ಲಾರಿ ಮತ್ತು ಆ್ಯಕ್ಟಿವಾ ಢಿಕ್ಕಿ

(ನ್ಯೂಸ್ ಕಡಬ) newskadaba.com ಬಡಗನ್ನೂರು, ಜುಲೈ.2. ಪುತ್ತೂರಿನಿಂದ ಸುಳ್ಯಪದವು ಕಡೆ ಬರುತ್ತಿದ್ದ ಆ್ಯಕ್ಟಿವಾಕ್ಕೆ ಕೆಂಪು ಕಲ್ಲು ಸಾಗಾಟದ ಲಾರಿಯು ಢಿಕ್ಕಿ ಹೊಡೆದಿದೆ.

ಮುಡಿನಡ್ಕ ಸುಳ್ಯಪದವು ರಸ್ತೆಯ ಕೊಯಿಲದಲ್ಲಿ ಸುಳ್ಯಪದವಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಂಪು ಕಲ್ಲು ಸಾಗಾಟದ ಲಾರಿಯು ಡಿಕ್ಕಿಹೊಡೆದ ಪರಿಣಾಮ ಆ್ಯಕ್ಟಿವಾ ಸವಾರ ಕನ್ನಡ್ಕ ವಾಸುದೇವ ಅವರ ಪುತ್ರ ಸುಭಾಶ್ಚಂದ್ರ ಅವರು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಎಎಸ್ ಸುರೇಶ್ರೈ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಈಶ್ವರಮಂಗಲ ಹೊರ ಠಾಣಾ ಎಎ ಸ್ ಸುರೇಶ್ರೈ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

error: Content is protected !!

Join the Group

Join WhatsApp Group