ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಆ.02. ಅಂಗಡಿಗೆ ಸಾಮಾನು ತರಲೆಂದು ಹೋದ ಮಹಿಳೆಯೊರ್ವಳು ನಾಪತ್ತೆಯಾಗಿರುವ ಘಟನೆ ಜು.29ರಂದು ನಡೆದಿದ್ದು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಕುಡಾಲ ನಿವಾಸಿ ಸಿ. ರವಿಚಂದ್ರನ್ ಎಂಬವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ.

ರವಿಚಂದ್ರನ್ ಪತ್ನಿ ಹಾಗೂ 2 ವರ್ಷದ ಮಗುವಿನೊಂದಿಗೆ ಕುಡಾಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ರವಿಚಂದ್ರನ್ ಅವರ ಅಕ್ಕ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಕಾರಣ ಜು.24ರಿಂದ ಮಂಗಳೂರಿನ ಆಸ್ಪತ್ರೆಯಲ್ಲೇ ಇದ್ದು, ಜು.29ರಂದು ಸಂಜೆ ಮನೆಯ ಮಾಲಿಕರು ರವಿಚಂದ್ರ ಅವರಿಗೆ ದೂರವಾಣೆ ಮೂಲಕ ಬೆಳಿಗ್ಗೆ 10ಗಂಟೆಗೆ ಮರ್ದಾಳಕ್ಕೆ ಸಾಮಾನು ತರಲೆಂದು ಹೋದವಳು ವಾಪಾಸ್ ಮನೆಗೆ ಬಂದಿಲ್ಲ. ಎಂದು ತಿಳಿಸಿದ್ದು ಆ ಬಳಿಕ ರವಿಚಂದ್ರನ್ ಪೋನ್ ಮಾಡಿದಾಗ ರಿಂಗ್ ಆದರೂ ಕರೆ ಸ್ವೀಕರಿಸಲಿಲ್ಲ. ನಂತರದಲ್ಲಿ ಪೋನಾಯಿಸಿದಾಗ ಸ್ವಿಚ್ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದು ಕಡಬ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು. ತನಿಖೆ ಕೈಗೊಂಡಿದ್ದಾರೆ.

error: Content is protected !!
Scroll to Top