ಕುಂತೂರು: ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವರ್ಗಾವಣೆ ➤ ನೂತನ ಧರ್ಮಗುರುಗಳಾಗಿ ಕಡಬದ ಫಾ| ಪಿ.ಕೆ.ಅಬ್ರಹಾಂ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ಕುಂತೂರು ಸೈಂಟ್ ಮೇರಿಸ್ ಜಾಕೊಬೈಟ್ ಸಿರಿಯನ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಫಾ| ಪಿ.ಕೆ. ಅಬ್ರಾಹಂ ಸೋಮವಾರದಂದು ಅಧಿಕಾರ ವಹಿಸಿಕೊಂಡರು.

ಪ್ರಸ್ತುತ ಕಡಬ ನಿವಾಸಿಯಾಗಿರುವ ಇವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚೀಮೇನಿ ಚರ್ಚ್‌ನಿಂದ ಕುಂತೂರಿಗೆ ವರ್ಗಾವಣೆಗೊಂಡಿದ್ದು, ಇವರು ಈ ಮೊದಲು ಜೆಪ್ಪು, ನೆಲ್ಯಾಡಿ, ಶಿರಾಡಿ, ಶಿಬಾಜೆ, ಅಡ್ಡಹೊಳೆ, ಬೆಳುವಾಯಿ, ಇಚ್ಲಂಪಾಡಿ, ರೆಂಜಿಲಾಡಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸ್ಥಳೀಯವಾಗಿ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

Also Read  ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದ ಬೈಕ್‌- ಸವಾರ ಪ್ರಾಣಾಪಾಯದಿಂದ ಪಾರು

error: Content is protected !!
Scroll to Top