ಇದು ಬಸ್ಸು ನಿಲ್ದಾಣವೋ…? ಅಲ್ಲ ಕಸದ ತೊಟ್ಟಿಯೋ…? ► ಅಸಹ್ಯ ಹುಟ್ಟಿಸುವ ನೆಟ್ಟಣ ಸಾರ್ವಜನಿಕ ಬಸ್ಸು ತಂಗುದಾಣ

(ನ್ಯೂಸ್ ಕಡಬ) newskadaba.com ಕಡಬ, ಜು.31. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮ ಪಂಚಾಯತ್ ಅಧೀನದಲ್ಲಿರುವ ನೆಟ್ಟಣ ಪೇಟೆಯಲ್ಲಿನ ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ಕಸ ಕಡ್ಡಿಗಳು ತುಂಬಿದ್ದು, ನೋಡೋದಕ್ಕೆ ಅಸಹ್ಯ ಅನಿಸುತ್ತಿದೆ.

ದಕ್ಷಿಣ ಭಾರತದ ಪ್ರಮುಖ ದೇವಸ್ಥಾನವಾದ ಕುಕ್ಕೇ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣವು ಇದೇ ನೆಟ್ಟಣದಲ್ಲಿದೆ. ರೈಲಿನಲ್ಲಿ ಆಗಮನಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯಬೇಕೆಂದರೆ ಇದೇ ಬಸ್ಸು ನಿಲ್ದಾಣವನ್ನೇ ಆಶ್ರಯಿಸಬೇಕಾಗಿದೆ‌. ಇಲ್ಲಿ ಕಸಕಡ್ಡಿಗಳು ಸೇರಿದಂತೆ ಮದ್ಯದ ಬಾಟಲಿಗಳನ್ನು ಹಾಕಿರುವುದರಿಂದ ಪ್ರಜ್ಞಾವಂತರನ್ನು ಮುಜುಗರಕ್ಕೀಡುಮಾಡುತ್ತಿದೆ‌. ತಕ್ಷಣವೇ ಸಂಬಂಧಪಟ್ಟವರು ಶುಚಿತ್ವದ ಕಡೆಗೆ ಗಮನ ಹರಿಸಿ ಬಸ್ಸು ನಿಲ್ದಾಣದಲ್ಲಿನ ಕಸಕಡ್ಡಿಗಳನ್ನು ತೆರವುಗೊಳಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ.

error: Content is protected !!

Join the Group

Join WhatsApp Group