ಚಾರ್ವಕ: ತೋಟದಲ್ಲಿ ಅಡಿಕೆ ಹೊಂಡಕ್ಕೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಫೆ.01. ಕಡಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ಪುತ್ತೂರು ತಾಲೂಕು ಚಾರ್ವಕ ಗ್ರಾಮದ ನಿವಾಸಿಯಾದ ಚೆನ್ನಯ್ಯ ಪೂಜಾರಿ ಎಂಬವರು ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ.

ಚೆನ್ನಯ್ಯ ಪೂಜಾರಿಯವರು ಮುಂಜಾನೆ ತಮ್ಮ ಜಾಗದ ತೋಟಕ್ಕೆ ಹೋಗಿ ಅಡಿಕೆ ಗಿಡಗಳಿಗೆ  ನೀರು ಹಾಯಿಸಲೆಂದು ಮನೆಯಿಂದ ಹೋಗಿದ್ದವರು ನಂತರ ತುಂಬಾ ಹೊತ್ತಾದರೂ ವಾಪಾಸು ಮನೆಗೆ ಬಾರದೇ ಇದ್ದುದರಿಂದ ಮನೆ ಯವರು ತೋಟಕ್ಕೆ ಹೋಗಿ  ಹುಡುಕಾಡಿದಾಗ ಚೆನ್ನಯ್ಯ ಪೂಜಾರಿರವರು ಅಡಿಕೆ ಬುಡದಲ್ಲಿ  ಗಿಡವೊಂದರ ಬುಡದಲ್ಲಿ ಸಿಲುಕಿ ಕವುಚಿ ಬಿದ್ದ ಸ್ಥಿತಿಯಲ್ಲಿದ್ದರು.

ತಕ್ಷಣವೇ ಮನೆಯವರು ಅಂಬ್ಯುಲೆನ್ಸ್ ವಾಹನವೊಂದನ್ನು ಬರ ಹೇಳಿ ಕಡಬ ಸಮುದಾಯ ಅಸ್ಪತ್ರೆಗೆ ಕರೆತಂದರು. ವೈದ್ಯರು ಚೆನ್ನಯ್ಯಪೂಜಾರಿಯವರನ್ನು ಪರೀಕ್ಷೀಸಿ ಚೆನ್ನಯ್ಯ ಪೂಜಾರಿಯವರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group