ಕರಾಟೆ ಸ್ಪರ್ದೆಯಲ್ಲಿ ಕಡಬ ಕ್ನಾನಾಯ ಜ್ಯೋತಿ ಶಾಲೆಗೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.comಕಡಬ,ಜ.30.ಕೇರಳದ ಅನಂತಪುರದ ಕುಂಬ್ಳೆ ಜೆಎಸ್‍ಕೆ ರವರು ಜ.27ರಂದು ನಡೆಸಿದ ಅಂತರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಣಮ್ಯ ಪಿ. ರಾವ್, ದೀಪಕ್ ಪಿ. ಗೌಡ, ಸಾನ್ವಿಕ ಕೆ.ಎಸ್. ಯಾನ್ವಿತ ಎಂ.ಕೆ., ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಚಿನ್ನದ ಪದಕ, ಸಾಕ್ಷತ್ ರೈ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ, ಮೊಹಮ್ಮದ್ ಅಶ್ವೀದ್ ಬಿ. ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ, ಪೃಥ್ವಿ ರೈ, ಸ್ವಪ್ನಿಲ್ ಕೆ. ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ, ದಿಶಾನ್ ಡಿ.ಆರ್., ಜೆಸ್ ಜೆ. ಅಯ್‍ಮನಂ, ತನ್ವಿತ್ ವಿ. ರೈ, ಮೆಜೋ ಜೋಸೆಫ್ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ, ಪ್ರಶಾಂತಿನಿ ಎನ್. ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಇವರು ತರಬೇತಿ ನೀಡಿರುತ್ತಾರೆ.

error: Content is protected !!

Join the Group

Join WhatsApp Group