ಕಡಬ: ಸಾವಿರಾರು ರೂ. ನಗದನ್ನು ಪೊಲೀಸ್ ಠಾಣೆಗೆ ತಲುಪಿಸಿದ ಕೆಎಸ್ಸಾರ್ಟಿಸಿ ನಿರ್ವಾಹಕ ► ಹಣ ಕಳೆದುಕೊಂಡವರು ಸೂಕ್ತ ದಾಖಲೆ ನೀಡಿ ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಕೋರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.04. ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ 37 ಸಾವಿರ ರೂ. ನಗದು ಬಸ್ ನಿರ್ವಾಹಕರಿಗೆ ದೊರೆತಿದ್ದು, ಹಣದ ವಾರೀಸುದಾರರು ಬಾರದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕರ ಮೂಲಕ ಕಡಬ ಠಾಣೆಗೆ ಹಸ್ತಾಂತರಿಸಿದ್ದಾರೆ.

ಅಕ್ಟೋಬರ್ 23 ರಂದು ಕಡಬದಿಂದ ಪಂಜಕ್ಕೆ ತೆರಳುತ್ತಿದ್ದ ಧರ್ಮಸ್ಥಳ ಘಟಕದ ಕೆಎಸ್ಸಾರ್ಟಿಸಿ KA.19.F.3060 ಬಸ್ ನ ನಿರ್ವಾಹಕ ಹನುಮಂತ ಹೊಡ್ಡಾರ್ ಎಂಬವರಿಗೆ ಬಸ್ಸಿನಲ್ಲಿ 37 ಸಾವಿರ ರೂ‌. ನಗದು ದೊರೆತಿದೆ. ನಗದನ್ನು ಘಟಕ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದ ಅವರು ವಾರಸುದಾರರ ಪತ್ತೆಗೆ ಶ್ರಮಿಸಿದ್ದಾರೆ. ಹತ್ತು ದಿನಗಳು ಕಳೆದರೂ ವಾರಸುದಾರರು ಪತ್ತೆಯಾಗದ ಕಾರಣ ಧರ್ಮಸ್ಥಳ ಘಟಕ ವ್ಯವಸ್ಥಾಪಕರಾದ ಶಿವರಾಮ ನಾಯ್ಕ್ ಭಾನುವಾರದಂದು ನಗದನ್ನು ಕಡಬ ಪೊಲೀಸ್ ಠಾಣೆಗೆ ನೀಡಿದ್ದು, ವಾರಸುದಾರರಿಗೆ ಹಸ್ತಾಂತರಿಸುವಂತೆ ಕೋರಿದ್ದಾರೆ‌. ಹಣ ಕಳೆದುಕೊಂಡವರು ಸೂಕ್ತ ದಾಖಲೆಯನ್ನು ನೀಡಿ ಹಣವನ್ನು ಪಡೆದುಕೊಳ್ಳುವಂತೆ ಕಡಬ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group