ಸುಳ್ಯ ಶಾಸಕ ಅಂಗಾರರಿಂದ ನಾಳೆ ಕಡಬದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ

(ನ್ಯೂಸ್ ಕಡಬ) newskadaba.com ಕಡಬ, ಅ.24. ಸುಳ್ಯ ಶಾಸಕ ಎಸ್.ಅಂಗಾರರವರು ಅಕ್ಟೋಬರ್ 25 ಗುರುವಾರದಂದು ಕಡಬದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲಿದ್ದಾರೆ.

ಬೆಳಿಗ್ಗೆ 9.30 ಕ್ಕೆ ಇತ್ತೀಚೆಗೆ ನಿಗೂಢ ಜ್ವರದಿಂದ ಸಾವನ್ನಪ್ಪಿರುವ ಹರೀಶ್ ಮಜ್ಜಾರ್ ಅವರ ಮನೆಗೆ ಭೇಟಿ ನೀಡಲಿರುವ ಅವರು ಬಳಿಕ 10.30 ರಿಂದ 12.00 ಗಂಟೆಯ ವರೆಗೆ ಕಡಬ ಬಿಜೆಪಿ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಕಡಬ ಬಿಜೆಪಿ ಶಕ್ತಿಕೇಂದ್ರದ ಪ್ರಕಟಣೆ ತಿಳಿಸಿದೆ.

Also Read  ಕಡಬ: ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ 4ನೇ ಶಾಖೆ ಉದ್ಘಾಟನೆ

error: Content is protected !!
Scroll to Top