ಮಂಗಳೂರು: ಕರಾವಳಿಗೆ ಕಾಲಿಟ್ಟ ಹಿಂಗಾರು ಮಳೆ ► ಬಂದರ್ ನಲ್ಲಿ ಚಂಡಮಾರುತದ ಬಗ್ಗೆ ಮೈಕ್ ಮೂಲಕ ಎಚ್ಚರಿಕೆ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಅ.04. ಕರಾವಳಿಗೆ ಹಿಂಗಾರು ಮಳೆಯು ಕಾಲಿಟ್ಟಿದ್ದು, ಶುಕ್ರವಾರದಿಂದ ಮಳೆಯ ಅಬ್ಬರ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಅರಬ್ಬೀ ಸಮುದ್ರದಲ್ಲಿ ಶುಕ್ರವಾರದಿಂದ ತೀವ್ರ ರೀತಿಯ ವಾಯುಭಾರ ಕುಸಿತವುಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಂಭವವಿದ್ದು, ಈಗಾಗಲೇ ಸಮುದ್ರಕ್ಕಿಳಿದಿರುವ ಮೀನುಗಾರರು ಅಕ್ಟೋಬರ್ 05 ರ ಒಳಗೆ ಹಿಂತಿರುಗಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಮಲ್ಪೆ ಬಂದರಿನಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ.

Also Read  ಬಟ್ವಾಳ: ನಾಪತ್ತೆಯಾಗಿರುವ ಯುವತಿ ಠಾಣೆಗೆ ಹಾಜರು  ➤ ಮನೆಗೆ ಹೋಗಲು ನಿರಾಕರಣೆ

error: Content is protected !!
Scroll to Top