ಮೂಡಬಿದಿರೆ: ಪ್ರೀತಿ ನಿರಾಕರಿಸಿದ ಯುವತಿಯನ್ನು ಇರಿದು ಕೊಂದ..!! ► ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಸೆ.28. ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಇರಿದು ಕೊಂದ ಭಗ್ನ ಪ್ರೇಮಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆಯ ಪ್ರಾಂತ್ಯ ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ಮೃತ ಯುವತಿಯನ್ನು ಮೂಡಬಿದ್ರೆಯ ಪ್ರಾಂತ್ಯ ಶಾಲಾ ಬಳಿಯ‌ ನಿವಾಸಿ ಚಂಪವತಿ ಕರ್ಕೇರಾ ಎಂಬವರ ಪುತ್ರಿ ಕು. ಚರಿಷ್ಮಾ ಆರ್. ಎಂದು ಗುರುತಿಸಲಾಗಿದೆ. ಬಜಾಲ್ ನಿವಾಸಿ ಲೋಹಿತ್ ಎಂಬಾತನು ಚರೀಷ್ಮಾಳನ್ನು ಪ್ರೀತಿಸುತ್ತಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರಾಕರಿಸಿದ್ದಳು ಎನ್ನಲಾಗಿದೆ. ಶುಕ್ರವಾರದಂದು ಚರೀಷ್ಮಾ ಮನೆಯಲ್ಲಿ ಓರ್ವಳೇ ಇದ್ದ ಸಂದರ್ಭದಲ್ಲಿ ಆಗಮಿಸಿದ ಲೋಹಿತ್ ಇರಿದು ತನ್ನ ಮನೆಗೆ ತೆರಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಭೀರ ಗಾಯಗೊಂಡಿದ್ದ ಚರೀಷ್ಮಾಳನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

Also Read  ಕುಂದಾಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 20 ಲಕ್ಷ ರೂ. ಚಿನ್ನಾಭರಣ ಕಳವು

error: Content is protected !!
Scroll to Top