ಮದ್ಯಪಾನ ಮಾಡಲು ನೀರು ಹಾಗೂ ಲೋಟ ನೀಡಿ ಸಹಾಯ ► ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.19. ಮದ್ಯಪಾನ ಮಾಡಲು ನೀರು ಹಾಗೂ ಗಾಜಿನ ಲೋಟವನ್ನು ಕೊಟ್ಟ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಮಂಗಳವಾರದಂದು ಪೆರ್ನೆಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಗಿರಿಯಪ್ಪ ಪೂಜಾರಿ ಎಂದು ಗುರುತಿಸಲಾಗಿದ್ದು, ಈತ ಮಂಗಳವಾರದಂದು ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪುರಿಯ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಮೋರಿಯಲ್ಲಿ ಅಬಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅಮಲು ಪದಾರ್ಥಗಳನ್ನು ತಂದ ವ್ಯಕ್ತಿಗೆ ಕುಡಿಯಲು ನೀರು ಹಾಗೂ ಗಾಜಿನ ಲೋಟವನ್ನು ಕೊಟ್ಟು ಅಮಲು ಪದಾರ್ಥ ಸೇವಿಸಲು ಅನುವು ಮಾಡಿಕೊಡುತ್ತಿದ್ದಾಗ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ಒಂದು ಪೂರ್ತಿ ಹಾಗೂ ಮತ್ತೊಂದು ಅರ್ಧ ತೆರೆದ ಪ್ಯಾಕೆಟ್ ಮದ್ಯವನ್ನು ವಶಪಡಿಸಿಕೊಂಡಿದ್ಧಾರೆ.

Also Read  ವೇಣೂರು: ಯುವಕ ಆತ್ಮಹತ್ಯೆ

error: Content is protected !!
Scroll to Top