ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಭಾರತ ಬಂದ್ ಹಿನ್ನೆಲೆ ► ಕಡಬ ಸಂಪೂರ್ಣ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಕರೆನೀಡಿದ್ದ ಭಾರತ ಬಂದ್ ಗೆ ಕಡಬದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಅಂಗಡಿ ಮಾಲಕರು ಸ್ವಯಂ ಪ್ರೇರಿತವಾಗಿ ಅಂಗಡಿ‌ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ ಗೆ ಬೆಂಬಲ‌ ವ್ಯಕ್ತಪಡಿಸಿದ್ದಾರೆ. ಕೆಲವು ರಿಕ್ಷಾ, ಜೀಪು ಸೇರಿದಂತೆ ಟೂರಿಸ್ಟ್ ವಾಹನಗಳು ರಸ್ತೆಗಿಳಿದರೂ ಪ್ರಯಾಣಿಕರಿಲ್ಲದೆ ಪರದಾಡಿದರು. ಉಳಿದಂತೆ ಮೆಡಿಕಲ್ ಸ್ಟೋರ್, ಹಾಲು, ಪೇಪರ್ ಅಂಗಡಿಗಳು ತೆರೆದಿದ್ದವು. ಕಡಬ, ಹೊಸ್ಮಠ, ಕುಂತೂರು, ಮರ್ಧಾಳ ಸಂಪೂರ್ಣ ಬಂದ್ ಆದರೆ ನೆಟ್ಟಣ, ಆಲಂಕಾರು ಪೇಟೆಯಲ್ಲಿ ಒಂದೆರಡು ಅಂಗಡಿಗಳು ತೆರೆದಿದ್ದವು.

Also Read  ರಾಜ್ಯಮಟ್ಟದ ಎಲ್ಇಡಿ ಮತ್ತು ಎಲ್‌ಸಿಡಿ ಟಿವಿ ಸರ್ವಿಸಿಂಗ್ ತರಬೇತಿ ಕಾರ್ಯಾಗಾರ ► ತರಬೇತುದಾರರಾಗಿ ಕಡಬದ ಗಣೇಶ್ ಇಡಾಳ

error: Content is protected !!
Scroll to Top