ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಭಾರತ ಬಂದ್ ಹಿನ್ನೆಲೆ ► ಕಡಬ ಸಂಪೂರ್ಣ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಕರೆನೀಡಿದ್ದ ಭಾರತ ಬಂದ್ ಗೆ ಕಡಬದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಅಂಗಡಿ ಮಾಲಕರು ಸ್ವಯಂ ಪ್ರೇರಿತವಾಗಿ ಅಂಗಡಿ‌ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ ಗೆ ಬೆಂಬಲ‌ ವ್ಯಕ್ತಪಡಿಸಿದ್ದಾರೆ. ಕೆಲವು ರಿಕ್ಷಾ, ಜೀಪು ಸೇರಿದಂತೆ ಟೂರಿಸ್ಟ್ ವಾಹನಗಳು ರಸ್ತೆಗಿಳಿದರೂ ಪ್ರಯಾಣಿಕರಿಲ್ಲದೆ ಪರದಾಡಿದರು. ಉಳಿದಂತೆ ಮೆಡಿಕಲ್ ಸ್ಟೋರ್, ಹಾಲು, ಪೇಪರ್ ಅಂಗಡಿಗಳು ತೆರೆದಿದ್ದವು. ಕಡಬ, ಹೊಸ್ಮಠ, ಕುಂತೂರು, ಮರ್ಧಾಳ ಸಂಪೂರ್ಣ ಬಂದ್ ಆದರೆ ನೆಟ್ಟಣ, ಆಲಂಕಾರು ಪೇಟೆಯಲ್ಲಿ ಒಂದೆರಡು ಅಂಗಡಿಗಳು ತೆರೆದಿದ್ದವು.

Also Read  ಕೊನೆಗೂ ಪಾಲೋಳಿ ಸರ್ವಋತು ಸೇತುವೆ ಸಂಚಾರಕ್ಕೆ ಮುಕ್ತ; ಎಡಮಂಗಲ, ಕಾಣಿಯೂರು, ಚಾರ್ವಾಕದವರಿಗೆ ಕಡಬ ತಲುಪುವುದು ಇನ್ನಷ್ಟು ಹತ್ತಿರ

error: Content is protected !!
Scroll to Top