ಕಲ್ಲಾಜೆಯಲ್ಲಿ ರಸ್ತೆಗುರುಳಿದ ಮರ: ಧರಾಶಾಹಿಯಾದ ವಿದ್ಯುತ್ ಕಂಬಗಳು ► ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿ ಬ್ಲಾಕ್

(ನ್ಯೂಸ್ ಕಡಬ) newskadaba.com ಕಡಬ, ಜು. 20. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಲ್ಲಾಜೆ ಹಾಗೂ ಬಿಳಿನೆಲೆ ಎಂಬಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗಡ್ಡವಾಗಿ ಬಿದ್ದ ಪರಿಣಾಮ ರಸ್ತೆ ತಡೆ ಉಂಟಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ‌.

ಕಲ್ಲಾಜೆಯಲ್ಲಿ ಅಶ್ವತ್ಥ ಮರವೊಂದು ಬುಡ ಸಹಿತ ಕಿತ್ತುಬಂದಿದ್ದು, ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ಸಮಯದಲ್ಲಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಸರಕಾರಿ ಬಸ್ಸು ತೆರಳಿದ್ದು, ಅದರಲ್ಲಿನ ಪ್ರಯಾಣಿಕರು ಕೂದಳೆಲೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಹಿಳೆಯೋರ್ವರು ತಿಳಿಸಿದ್ದಾರೆ. ರಸ್ತೆ ತಡೆಯಿಂದಾಗಿ ಹಲವು ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಮೆಸ್ಕಾಂ ಜೆಇ ನಾಗರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ರಸ್ತೆ ಸುಗಮಗೊಳಿಸಲು ಸಹಕರಿಸಿದರು.

error: Content is protected !!
Scroll to Top