ಬಿಳಿನೆಲೆ: ಮನೆಯ ಹಿಂಬದಿಯ ಗುಡ್ಡ ಕುಸಿತ ► ತೆಂಗು – ಅಡಿಕೆ ಮರಗಳಿಗೆ ಹಾನಿ, ಮನೆಯವರ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ.18. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ಗುಡ್ಡೆ ಕುಸಿದ ಪರಿಣಾಮ ಎರಡು ತೆಂಗು ಹಾಗೂ ಹತ್ತು ಅಡಿಕೆ ಮರಗಳಿಗೆ ಹಾನಿಯಾದ ಘಟನೆ ಶನಿವಾರದಂದು ನಡೆದಿದೆ.

ಪುತ್ತಿಲ ನಿವಾಸಿ ಗುಣಪಾಲ ಗೌಡ ಎಂಬವರ ಮನೆಯ ಸಮೀಪದ ಗುಡ್ಡ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಭೇಟಿ ನೀಡಿ ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಗುಣಪಾಲ ಗೌಡರ ಮನೆಯವರನ್ನು ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ.

Also Read  ಮಂಗಳೂರು: ‘ಹ್ಯುಮಾನಿಟಿ ಫೌಂಡೇಶನ್’ ಸಂಘಟನೆ ಅಸ್ತಿತ್ವಕ್ಕೆ

 

error: Content is protected !!
Scroll to Top