ತೀವ್ರ ಮಳೆಯ ಹಿನ್ನೆಲೆ ► ಹೊಸ್ಮಠ ಸೇತುವೆ ಮತ್ತೆ ಮುಳುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.12. ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೊಸ್ಮಠ ಸೇತುವೆಯು ಭಾನುವಾರದಂದು ಮತ್ತೆ ಮುಳುಗಿದ್ದು, ಸಂಚಾರದಲ್ಲಿ ತಡೆಯುಂಟಾಗಿದೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಪ್ರಯಾಣಿಕರು ಇಚಿಲಂಪಾಡಿ – ಪೆರಿಯಶಾಂತಿ ರಸ್ತೆಯ ಮೂಲಕ ಸಂಚರಿಸುವಂತಾಗಿದೆ. ಸೇತುವೆಯ ಇಕ್ಕೆಡೆಗಳಲ್ಲೂ ಕಡಬ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ‌. ತೀವ್ರ ಮಳೆಯ ಹಿನ್ನೆಲೆಯಲ್ಲಿ ಬುಧವಾರದಿಂದ ಗುರುವಾರ ರಾತ್ರಿಯ ವರೆಗೆ ಹೊಸ್ಮಠ ಸೇತುವೆಯು ಎರಡು ದಿನಗಳ ಕಾಲ ಮುಳುಗಡೆಗೊಂಡಿದ್ದು, ಇದೀಗ ಮತ್ತೆ ಮುಳುಗಿದೆ.

error: Content is protected !!

Join the Group

Join WhatsApp Group