ಕಡಬ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ಗೃಹರಕ್ಷಕ ದಳದವರಿಂದ ವನಮಹೋತ್ಸವ ಆಚರಣೆ ಜು.22ರಂದು ಕಡಬ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ| ಮುರಳಿಮೋಹನ್ ಚೂಂತಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕಡಬ ಶ್ರೀ ದುರ್ಗಾಣಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ,ನಿವೃತ್ತ ಮುಖ್ಯ ಗುರು ಜನಾರ್ದನ ಗೌಡ ಪಣೆಮಜಲು ರವರು ಮಾತನಾಡಿ, ಮನುಷ್ಯ ಸಂಕುಲ ಮುಂದೆ ಉಳಿಯಬೇಕಾದರೆ ನಮಗೆ ಆಮ್ಲಜನಕ ಬೇಕು, ಈ ಆಮ್ಲಜನಕ ಮರ ಗಿಡಗಳಿಗೆ ಬಿಟ್ಟು ಯಾವುದೇ ಪ್ಯಾಕ್ಟರಿಯಿಂದ ತಯಾರಿಸಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ನಾವು ಮರಗಿಡಗಳನ್ನು ಬೆಳೆಸಬೇಕು, ಇಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯಕ್ಕೆ ಕಾಡು ನಾಶವಾಗಿರುವುದೇ ಕಾರಣ ಈ ಹಿನ್ನಲೆಯಲ್ಲಿ ನಾವು ಸಂಘಟನೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಕಡಬ ಗೃಹರಕ್ಷಕದಳದ ಕಾರ್ಯ ಶ್ಲಾಘನಿಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಡಬ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಹಮೀದ್, ಗೃಹ ರಕ್ಷಕದಳದ ಘಟಕಾಧಿಕಾರಿ ಎಚ್.ಕೆ. ಗೋಪಾಲ್ ಉಪಸ್ತಿತರಿದ್ದರು. ಕಡಬ ಗೃಹರಕ್ಷಕ ದಳದ ಪ್ಲಟೂನ್ ಸಾರ್ಜಂಟ್ ತೀರ್ಥೇಶ್ ಎ.ಎಸ್. ಜಿಲ್ಲಾ ಕಮಾಡೆಂಟ್‍ರವರಿಗೆ ಗೌರವ ವಂದನೆ ಸಲ್ಲಿಸಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಸುಂದರ, ಉದಯಶಂಕರ್, ದಯಾನಂದ, ಜಯಪ್ರಕಾಶ್ ಸೇರಿದಂತೆ ಸುಮಾರು 44 ಜನ ಸಿಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.

Also Read  ಪುಣ್ಚಪ್ಪಾಡಿ :ಕಾಂಗ್ರೆಸ್‍ಗೆ ಸೇರ್ಪಡೆಯಾಗಿಲ್ಲ : ಬಿಜೆಪಿ ಸ್ಪಷ್ಟನೆ

error: Content is protected !!
Scroll to Top