ದಕ್ಷಿಣ ಕನ್ನಡ:ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ

 (ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ,ಜೂ.11. ಭಾರತ್ ವಿಕಾಸ್ ಪರಿಷದ್,ದಕ್ಷಿಣ ಕನ್ನಡ , ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು ದಿ: 06 , ಜುಲೈ 2018 ರಂದು ನಗರದ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ಭಾರತ್ ವಿಕಾಸ್ ಪರಿಷದ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ಸುರೇಶ ಜೈನ ರವರು ನೆರವೇರಿಸಿದರು.ಮಂಗಳಾ ಶಾಖೆ ಯ ನೂತನ ಅಧ್ಯಕ್ಷ ರಾಗಿ ಡಾ. ಸಚ್ಚಿದಾನಂದ ರೈ ರವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಯಾಗಿ ನಿತಿನ್ ಶೆಟ್ಟಿ ಅಗರಿ , ಖಜಾಂಚಿಯಾಗಿ ಮಾಧವ ಎಂ ಎಸ್ ಹಾಗೂ ಸಹ ಕಾರ್ಯದಶಿಯಾಗಿ ಡಾ. ಅನಂತ ಪ್ರಭು ರವರು ಪ್ರಮಾಣವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಡಾ. ಸತೀಶ್ ರಾವ್ , ಮಂಗಳೂರು ಮಹಾನಗರ ಸಂಘಚಾಲಕ್ (RSS), ಹಾಗೂ ಭಾ. ವಿ. ಪ. ನ ಕರ್ನಾಟಕದ ಪ್ರಾಂತ ಕಾರ್ಯದರ್ಶಿ ಡಾ. ದೇವತಾ ಶ್ರೀನಿವಾಸ್, ಶ್ರೀ ಭಾರ್ಗವ ಎಂ. ಆರ್. ಪ್ರಾಂತ ಕಾರ್ಯದರ್ಶಿ ( ಸಂಸ್ಕಾರ) , ಶ್ರೀ ಐ, ಮೋಹನ್ , ಪ್ರಾಂತ ಕಾರ್ಯದರ್ಶಿ (ಸೇವಾ) ರವರು ಉಪಸ್ಥಿತರಿದ್ದರು.ಭಾ. ವಿ. ಪ. ನ ಹತ್ತು ಹಲವು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ನೂತನ ಅಧ್ಯಕ್ಷ ರಾದ ಡಾ. ಸಚ್ಚಿದಾನಂದ ರೈ ರವರು ತಿಳಿಸಿದರು.ಈ ಪದಗ್ರಹಣ ಸಮಾರಂಭದಲ್ಲಿ ಸುಮಾರು 50 ಜನರು ಭಾ. ವಿ. ಪ. ನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮ ವು ವಂದೇಮಾತರಂ ಗಾಯನಕ್ದೊಂದಿಗೆ ಪ್ರಾರಂಭವಾಯಿತು.ನಿರೂಪಣೆಯು ಪ್ರೀತಿ ಶೇಣಿೈ ರವರು ನೆರವಿರಿಸಿದರು, ನೂತನ ಕಾರ್ಯದರ್ಶಿಯಾದ ನಿತಿನ್ ಶೆಟ್ಟಿ ಅಗರಿ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.

error: Content is protected !!

Join the Group

Join WhatsApp Group