ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ,05. ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಗ್ರೂಪ್ ‘ಡಿ’ ನೌಕರರ ಸದಸ್ಯರ ಮಕ್ಕಳಿಗೆ 2017-18 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಜಿಲ್ಲಾ ವ್ಯಾಪ್ತಿಯ ಸಂಘದ ಸದಸ್ಯರ ಮಕ್ಕಳಿಂದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.

 

ಅರ್ಜಿ ಸಲ್ಲಿಸುವವರು ಇಲಾಖಾ ಮುಖ್ಯಸ್ಥರಿಂದ ಅಂಕ ಪಟ್ಟಿ ದೃಢೀಕರಣ ಮತ್ತು ಸಂಘದಿಂದ ಅರ್ಜಿ ನಮೂನೆಯನ್ನು ಪಡೆದು ಆಗಸ್ಟ್ 31 ರಂದು ಸಂಘದ ಪದಾಧಿಕಾರಿಗಳಿಗೆ ಅಥವಾ ಸಂಘದ ಕಛೇರಿಗೆ ತಲುಪಿಸಬೇಕು.
ಜುಲೈ 14 ರಂದು ಬೆಳಿಗ್ಗೆ 10.30 ಕ್ಕೆ ಸಂಘದ ಸಭಾ ಭವನದಲ್ಲಿ ವಾರ್ಷಿಕ ಮಹಾಸಭೆ ಜರುಗಲಿದ್ದು ಈ ಸಭೆಯಲ್ಲಿ 2017-18 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಸೇವೆಯಿಂದ ನಿವೃತ್ತಿ ಹೊಂದಿರುವ ಸದಸ್ಯರಿಗೆ ಹಾಗೂ ಪದೋನ್ನತಿ ಹೊಂದಿರುವ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

Also Read  ಕಾಲೇಜುಗಳಲ್ಲಿ ಪ್ರಾಮಾಣಿತ ಕಾರ್ಯಚರಣೆ ವಿಧಾನದ(ಎಸ್.ಓ.ಪಿ) ಪಾಲನೆ ಕಡ್ಡಾಯ ➤ ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ

 

 

 

 

error: Content is protected !!
Scroll to Top