ಕೈಕಂಬಕ್ಕೆ ಮತ್ತೆ ಕಾಲಿಟ್ಟರೇ ನಕ್ಸಲರು…? ► ಭಾಗೀಮಲೆ ರಕ್ಷಿತಾರಣ್ಯದಲ್ಲಿ ಸಂಚರಿಸಿದ ಗುಮಾನಿಯಿಂದ ಆತಂಕದಲ್ಲಿ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17. ಇಲ್ಲಿಗೆ ಸಮೀಪದ ಭಾಗಿಮಲೆ ಮೀಸಲು ಅರಣ್ಯದ ಭಾಗ್ಯ ಎಂಬಲ್ಲಿ ಶನಿವಾರ ತಡರಾತ್ರಿ ಶಂಕಿತ ನಕ್ಸಲರು ಸಂಚಾರ ನಡೆಸಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯವಾಗಿ ಈ ಕುರಿತು ವದಂತಿ ಹಬ್ಬಿದ್ದು ಈ ಭಾಗದಲ್ಲಿ ಎಎನ್ಎಫ್ ತಂಡವು ರವಿವಾರ ಬೆಳಗ್ಗೆ ಕೂಂಬಿಂಗ್ ಆರಂಭಿಸಿದೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲ್ ನಿಗ್ರಹ ಸ್ಕ್ವಾಡ್ ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದವು. ಈ ಕಾರಣಕ್ಕಾಗಿ ಭಾಗೀಮಲೆ ಮೀಸಲು ಅರಣ್ಯದ ಭಾಗ್ಯ ಮೂಲಕ ನಕ್ಸಲರು ಕಾಡಿಂದ ಇಳಿದು ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಪೊಲೀಸ್ ಮೂಲಗಳು ಮಾತ್ರ ಇದನ್ನು ಇನ್ನೂ ಖಚಿತ ಪಡಿಸಿಲ್ಲ.

Also Read  ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

error: Content is protected !!
Scroll to Top