ಸುಳ್ಯ: ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ► ಕಾರ್ಯಾಚರಣೆ ವೇಳೆ ಹೃದಯಾಘಾತದಿಂದ ಎಎನ್ಎಫ್ ಯೋಧ ಮೃತ್ಯು

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.16. ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ನಕ್ಸಲ್ ನಿಗ್ರಹ ದಳದ ಯೋಧರೋರ್ವರು ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ.

ಮೃತ ಯೋಧನನ್ನು ಕಾರ್ಕಳ ಮೂಲದ ರಂಗಸ್ವಾಮಿ (48) ಎಂದು ಗುರುತಿಸಲಾಗಿದೆ. ಇವರು ತನ್ನ ತಂಡದೊಂದಿಗೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೋಟೆ ಕಾಡು ಅರಣ್ಯ ಪ್ರದೇಶದಲ್ಲಿ ಎಂಬಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದು, ತಕ್ಷಣವೇ ತಮ್ಮ ತಂಡದ ಸದಸ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರಾದರೂ ಅದಾಗಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಜಯರಾಮ್ ಎಂಬವರ ಮನೆಯ ರಬ್ಬರ್ ಟ್ಯಾಪಿಂಗ್ ಕೆಲಸಗಾರ ಕೇರಳ ಮೂಲದ ಥಾಮಸ್.ಎ.ಜೆ. ಎಂಬವರು ಗುರುವಾರ ರಾತ್ರಿ ಊಟಕ್ಕೆ ಕುಳಿತಿರುವಾಗ ಮೂವರು ಶಂಕಿತ ನಕ್ಸಲರು ಮನೆ ಒಳಗೆ ಬಂದು ಬಂದೂಕನ್ನು ತೋರಿಸಿ ತನಗೆಂದು ಮಾಡಿಟ್ಟಿದ್ದ ಅಡುಗೆಯನ್ನು ತೆಗೆದುಕೊಂಡು ಮನೆಯ ಹೊರಗೆ ಬಂದು ವರಾಂಡದಲ್ಲಿ ಊಟ ಮಾಡಿ ಐದು ನಿಮಿಷಗಳಲ್ಲಿ ಹೋಗಿದ್ದರು. ಪಿಸ್ತೂಲ್ ಹಾಗೂ ಕೋವಿಗಳನ್ನು ಹಿಡಿದುಕೊಂಡಿದ್ದರಿಂದ ಹೆದರಿದ ಥಾಮಸ್ ರವರು ಪೊಲೀಸರಿಗೆ ಮಾಹಿತಿ‌ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯವರು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

error: Content is protected !!

Join the Group

Join WhatsApp Group