ಬೊಳುವಾರು: ಕಾರು ಢಿಕ್ಕಿ ► ಪಾದಚಾರಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.10. ಕಾರೊಂದು ಢಿಕ್ಕಿಯಾದ ಪರಿಣಾಮ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಬೊಳುವಾರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತ ಪಾದಚಾರಿಯನ್ನು ಸುಬ್ರಹ್ಮಣ್ಯದ ಮಹಮ್ಮಾಯಿ ಹೊಟೇಲ್‌ನಲ್ಲಿ ಸೂಪರ್ ವೈಸರ್ ಆಗಿದ್ದ ಉರ್ಲಾಂಡಿ ನಿವಾಸಿ ದಿ.ವಾಸುದೇವ ಹೆಗ್ಡೆ ಎಂಬವರ ಪುತ್ರ ಪ್ರಶಾಂತ್ ಹೆಗ್ಡೆ ಎಂದು ಗುರುತಿಸಲಾಗಿದೆ. ಇವರು ಭಾನುವಾರದಂದು ರಜೆ ಇದ್ದ ಕಾರಣ ಶನಿವಾರ ರಾತ್ರಿ ನಡೆದುಕೊಂಡು ಮನೆಯ ಕಡೆಗೆ ತೆರಳುತ್ತಿದ್ದಾಗ ಬೊಳುವಾರಿನ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಬಳಿ ಕಾರು ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ನಾಳೆ ಕಡಬದಲ್ಲಿ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ➤ ಜೇಸಿಐ ಕಡಬ ಕದಂಬ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸಹಯೋಗ

error: Content is protected !!
Scroll to Top