ಕೋಡಿಂಬಾಳ: ಕೆಲಸಕ್ಕೆಂದು ತೆರಳಿದ ಯುವಕ‌ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಕೆಲಸಕ್ಕೆಂದು ಮನೆಯಿಂದ ಹೊರಟು ಹೋದ ಯುವಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಶರೀಫ್ ಕೆ.ಎಸ್‌. ಎಂಬವರ ಪುತ್ರ ಅನೀಶ್‌ ರಹಿಮಾನ್‌‌ ಎಂಬಾತ ಸುಮಾರು ಮೂರು ತಿಂಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದು, ಕೆಲಸದ ನಿಮಿತ್ತ ಮೇ 26 ರಂದು ಕನ್ಯಾಕುಮಾರಿಗೆಂದು ಹೇಳಿ ಮನೆಯಿಂದ ಹೊರಟು ಹೋದವರು ಈ ತನಕ ಯಾವುದೇ ದೂರವಾಣಿ ಕರೆ ಮಾಡದೇ ಇರುವುದಲ್ಲದೆ, ಮನೆಯವರ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಕಾಣೆಯಾದ ಅನೀಶ್‌ ರಹಿಮಾನ್‌‌ನ ಪತ್ತೆಯ ಬಗ್ಗೆ ನೆರಕರೆಯವರಲ್ಲಿ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದು ಪತ್ತೆಯಾಗದೇ ಇರುವುದರಿಂದ ಆತನ ತಂದೆ ಶರೀಫ್ ಕೆ.ಎಸ್. ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಾತೃಭಾಷೆಯಾಗಿ ಒಂದನೇ ತರಗತಿಯಿಂದಲೇ ಕೊಂಕಣಿ ಕಲಿಕೆಗೆ ಅವಕಾಶ ಕೋರಿಕೆ

error: Content is protected !!
Scroll to Top