ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ► ಸದನದಲ್ಲಿ ಗುಡುಗಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಹೋರಾಟ ಏನಿದ್ದರೂ ಅಧಿಕಾರ ದಾಹದಿಂದ ಹೊರಟಿರೋ ಅಪ್ಪ – ಮಕ್ಕಳ ವಿರುದ್ಧ ಎಂದು ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮುಳುಗುವ ದೋಣಿಯಲ್ಲಿ ಕಾಲಿಟ್ಟರಲ್ಲಾ ಎಂದು ಒಂದು ಕ್ಷಣ ಭಾವುಕರಾದ ಬಿಎಸ್ವೈ, ಕೆಲವೇ ದಿನಗಳಲ್ಲಿ ಅಪ್ಪ – ಮಕ್ಕಳಿಂದ ಕಾಂಗ್ರೆಸ್ ಪಕ್ಷ ನಾಶವಾಗಲಿದೆ ಎಂದರು. ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿದ್ದರ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ನಾವೇನು ಜೆಡಿಎಸ್ ನ್ನು ಬಾಚಿ ಅಪ್ಪಿಕೊಳ್ಳಲು ಹೋಗಿದ್ವಾ..? ಅವರೇ ಬಂದ ಕಾರಣ ನಾವು ಹೊಂದಾಣಿಕೆ ಮಾಡಿಕೊಂಡಿದ್ದೆವು ಎಂದು ತಿರುಗೇಟು‌ ನೀಡಿದರು.

error: Content is protected !!

Join the Group

Join WhatsApp Group