ಉಪ್ಪಿನಂಗಡಿ: ಪಿಕಪ್ ಚಾಲಕನಿಗೆ ತಂಡದಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.11. ವ್ಯಕ್ತಿಯೋರ್ವರ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಮಠ ನಿವಾಸಿ ಅಬ್ದುಲ್ ರಹ್ಮಾನ್ (೪೫) ಹಲ್ಲೆಗೊಳಗಾದವರು. ಇವರು ಗ್ಯಾಸ್ ಸಿಲಿಂಡರ್ ವಿತರಕ ಪಿಕಪ್ ಚಾಲಕನಾಗಿದ್ದು, ಎಂದಿನಂತೆ ಮಂಗಳವಾರ ಕೂಡ ಸೇಲ್ಸ್ ಮೆನ್ ರಝಾಕ್ ಅವರನ್ನು ಕರೆದುಕೊಂಡು ಬರಲು ಮೇದರಬೆಟ್ಟಿಗೆ ಬರುತಿದ್ದರು. ಆ ಸಂದರ್ಭ ಮೇದರಬೆಟ್ಟು ಬಳಿ ಇವರ ಟೆಂಪೋವನ್ನು ಅಡ್ಡಗಟ್ಟಿದ ಓಮ್ನಿಯಲ್ಲಿದ್ದ ತಂಡವೊಂದು ಹಲ್ಲೆ ನಡೆಸಿ, ಟೆಂಪೋಗೆ ಕಲ್ಲು ಹೊಡೆದು ಪರಾರಿಯಾಗಿದೆ. ಗಾಯಾಳು ಅಬ್ದುಲ್ ರಹ್ಮಾನ್ ರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತಿದ್ದಾರೆ.

error: Content is protected !!

Join the Group

Join WhatsApp Group