(ನ್ಯೂಸ್ ಕಡಬ) newskadaba.com, ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಇತಿಹಾಸ ಬರೆದ ಭಾರತದ ಯುವ ಗ್ರಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರನ್ನು ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಸನ್ಮಾನಿಸಿ, ₹50 ಲಕ್ಷ ಬಹುಮಾನ ಮೊತ್ತವನ್ನು ಹಸ್ತಾಂತರಿಸಿದ್ದಾರೆ.
ವಿಶೇಷ ಕ್ಷಣ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಇಬ್ಬರೂ ಸುಮಾರು 15 ನಿಮಿಷಗಳ ಕಾಲ ಚೆಸ್ ಪಂದ್ಯವನ್ನು ಆಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡ ಪ್ರಜ್ಞಾನಂದ, “ಸಿಎಂ ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಪಂದ್ಯದಲ್ಲಿ ನಾನೇ ಗೆದ್ದೆ, ಅವರು ತುಂಬಾ ಪ್ರೋತ್ಸಾಹದಾಯಕವಾಗಿ ಮಾತನಾಡಿದರು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ತಮಿಳುನಾಡು ಸಿಎಂ ಕಚೇರಿ ಟ್ವೀಟ್ ಮಾಡಿದ್ದು, ಪ್ರಜ್ಞಾನಂದ ಅವರ ಜಾಗತಿಕ ಸಾಧನೆಯನ್ನು ಗೌರವಿಸಲು ಈ ನಗದು ಬಹುಮಾನ ನೀಡಲಾಗಿದೆ ಎಂದು ಪ್ರಕಟಿಸಿದೆ.









